ನಕಲಿ ರಸಗೊಬ್ಬರ ಮಾರಾಟ ಜಾಲ ಪತ್ತೆ

ನಕಲಿ ರಸಗೊಬ್ಬರ ಮಾರಾಟ ಜಾಲ ಪತ್ತೆ: ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ..!
ಬೆಳಗಾವಿ: ಚನ್ನಮ್ಮನ ಕಿತ್ತೂರಿನಲ್ಲಿ ನಕಲಿ ರಸಗೊಬ್ಬರ ಮಾರಟ ಮಾಡುತ್ತಿದ್ದ ಗೋದಾಮೀನ ಮೇಲೆ ದಾಳಿ ನಡೆಸಿ ಕೃಷಿ ಅಧಿಕಾರಿಗಳು, ನಕಲಿ ರಸಗೊಬ್ಬರ ವಶಪಡಿಸಿಕೊಂಡು, ಆರೋಪಿ ಮೇಲೆ ಕ್ರಮ ಕೈಗೊಂಡಿದ್ದಾರೆ.
ದಾಳಿ ನಡೆಸಿದ ಸ್ಥಳದಲ್ಲಿ ಬಯೋ ಡಿ.ಎ.ಪಿ. ಮತ್ತು ಬಯೋ ಯೂರಿಯಾ ಹೆಸರುಗಳನ್ನು ಚೀಲಗಳ ಮೇಲೆ ಮುದ್ರಿಸಿ ಜಿಪಂ ಒಳಗೊಂಡ ಭೂ ಸುಧಾರಕಗಳನ್ನು ರಸಗೊಬ್ಬರಗಳೆಂದು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ನಕಲಿ ರಸಗೊಬ್ಬರಗಳನ್ನು ಮಾರಾಟಗಾರರು ಎ.ಎಸ್ . ಗ್ರೂಪ್ ಧಾರವಾಡ ಇವರಿಂದ ಪಡೆದುಕೊಂಡು ಕಿತ್ತೂರಿನ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ
ಕೃಷಿ ಅಧಿಕಾರಿಗಳ ತಂಡವು ಹೊಸ ಚನ್ನಾಪರ ಗಿರಿಯಾಲ ರಸ್ತೆ ಇಲ್ಲಿನ ಮಲ್ಲಯ್ಯಾ ಬಸವಣ್ಣಯ್ಯಾ ಚಿಕ್ಕಮಠ ಇವರ ಸಿದ್ಧಾರೂಡ ಅಸೋಸಿಯೇಟ್ ಆಗ್ರಿಕಲ್ಟರ್ ಸರ್ವಿಸ್ ಸೆಂಟರ್, ಗೋದಾಮಿನ ಮೇಲೆ ದಾಳಿ ನಡೆಸಿ, ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಜೊತೆಗೆ ನಕಲಿ ಲಿಕ್ವಿಡ್ ಬಯೋ ಉತ್ಪನ್ನಗಳನ್ನು ಜಪ್ತಿ ಮಾಡಿ ಸ್ಥಳವನ್ನು ಸೀಲ್ ಮಾಡಿದ್ದಾರೆ.
ದಾಳಿ ಸಂದರ್ಭದಲ್ಲಿ ಬಯೋ ಡಿ.ಎ.ಪಿ , 76 ಚೀಲ ಮತ್ತು ಬಯೋ ಯೂರಿಯಾ 03 ಚೀಲ ಜೊತೆಗೆ 14 ಬಯೋ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೃಷಿ ಇಲಾಖೆಯಿಂದ ಪರವಾನಿಗೆಯನ್ನು ಪಡೆಯದೆ ನಕಲಿ ರಸಗೊಬ್ಬರ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಲ್ಲಯ್ಯಾ ಬಸವಣ್ಣಯ್ಯಾ ಚಿಕ್ಕಮಠ ಇವರ ಮೇಲೆ ರಸಗೊಬ್ಬರ ನಿಯಂತ್ರಣ ಕಾಯ್ದೆ ಪ್ರಕಾರ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.