ಖಾನಾಪೂರದಲ್ಲಿ ಅಂಗಡಿ ಮಾಲಿಕರಿಗೆ ಶಾಕ್ ಕೊಟ್ಟ ಬೆಳಗಾವಿ ಎ.ಸಿ. ಅಶೋಕ ತೇಲಿ

ಖಾನಾಪೂರದಲ್ಲಿ ಅಂಗಡಿ ಮಾಲಿಕರಿಗೆ ಶಾಕ್ ಕೊಟ್ಟ ಬೆಳಗಾವಿ ಎ.ಸಿ. ಅಶೋಕ ತೇಲಿ
ಬೆಳಗಾವಿ: ಖಾನಾಪೂರ ನಗರದ ವಿವಿಧ ಟ್ರೇಡರ್ಸಗಳ ಮೇಲೆ ಬೆಳಗಾವಿ ಎ.ಸಿ ಅಶೋಕ ತೇಲಿ ದಿಢೀರ್ ದಾಳಿ ನಡೆಸಿ, ಮಾಲಿನ್ಯಕ್ಕೆ ಕಾರಣವಾಗುವ ಸುಮಾರು ಒಂದು ಕ್ವಿಂಟಾಲಗೂ ಅಧಿಕ ಪ್ಲಾಸ್ಟಿಕ್ ಬ್ಯಾಗ, ವಶಪಡಿಸಿಕೊಂಡಿದ್ದಾರೆ.
ಪರಿಸರ ಮಾಲಿನ್ಯ ತಡೆ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ, ಮಾರಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ್ ತೇಲಿ ಖಾನಾಪೂರ ವ್ಯಾಪ್ತಿಯ ಕಿರಾಣಿ ಅಂಗಡಿ, ಬೇಕರಿ ಅಂಗಡಿ ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು.
ಕೂಡಲೇ ಸಂಬಂಧಿಸಿದ ಅಂಗಡಿ ಮಾಲಿಕರು ದಂಡ ಕಟ್ಟಿ, ಇಲ್ಲವಾದರೆ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ವಿವೇಕ ಬನ್ನೆ ಮುಖ್ಯ ಚೀಫ್ ಆಫೀಸರ, ಎಸ್.ಆರ್.ಪಾಟೀಲ, ಪ್ರೇಮಾನಂದ ನಾಯಿಕ ದಾಳಿಯಲ್ಲಿ ಪಾಲ್ಗೊಂಡಿದ್ದರು. ದಾಳಿ ನಡೆಸಿದ ಅಂಗಡಿಗಳಿಂದ ದಂಡವನ್ನು ಸಹ ವಸೂಲಿ ಮಾಡಲಾಗಿದೆ.