ಅವರೊಬ್ಬರೇ ತಲಾ:ಹೀಗೆ ಕೆ.ಎಲ್.ರಾಹುಲ್ ಹೇಳಿದ್ದೇಕೆ ಗೊತ್ತಾ…!

ಮಹಾಂತೇಶ ಇರಳಿ
ಬೆಂಗಳೂರು: ನಾನಲ್ಲ ಮಹೇಂದ್ರ ಸಿಂಗ್ ಧೋನಿ ಒಬ್ಬರೇ ತಲಾ ಎಂದು ಖ್ಯಾತ ಕ್ರಿಕೆಟರ್ ಕೆ.ಎಲ್. ರಾಹುಲ್ ಹೇಳಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಉತ್ತಮ ಆಟವನ್ನು ಪ್ರದರ್ಶನ ಮಾಡುತ್ತಿದ್ದಾರೆ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ಯಾಪ್ಟನ್ ಆಗಿರುವ ಕೆ ಎಲ್ ರಾಹುಲ್. ಅದ್ಭುತ ಬ್ಯಾಟಿಂಗ್ ಮತ್ತು ಅದ್ಭುತ ವಿಕೆಟ್ ಕೀಪಿಂಗ್ ಪ್ರದರ್ಶನ ಮಾಡುತ್ತಾರೆ. ಐಪಿಎಲ್ ನಲ್ಲಿ ಕೆ.ಎಲ್. ರಾಹುಲ್ ಅದ್ಭುತ ಆಟಕ್ಕೆ ಮನಸೋತ ತಮಿಳುನಾಡಿನ ಅಭಿಮಾನಿಯೊಬ್ಬ ತಲಾ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿರುದು ನೀಡಿದ್ದಾನೆ.
ಅಭಿಮಾನಿ ನೀಡಿದ ಬಿರುದನ್ನು ಕೆ ಎಲ್ ರಾಹುಲ್ ಅಷ್ಟೇ ವಿನಯವಾಗಿ ತಿರಸ್ಕರಿಸಿ ಕ್ರಿಕೆಟ್ನಲ್ಲಿ ಅವರೊಬ್ಬರೇ ತಲಾ ಇರೋದು. ಅವರೇ ಮಹೇಂದ್ರ ಸಿಂಗ್ ಧೋನಿ. ಅವರಿಗೆ ನೀಡಿರುವ ತಲಾ ಬಿರುದು ನನಗೆ ನೀಡಬೇಡಿ ಎಂದು ವಿನಯವಾಗಿ ವಿನಂತಿಸಿಕೊಂಡಿದ್ದಾರೆ ಕೆ ಎಲ್ ರಾಹುಲ್ . ಕೆ ಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ನ ಕ್ಯಾಪ್ಟನ್ ಆದ ಬಳಿಕ ಈ ಸೀಸನ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಬರ್ಜರಿ ಆಟವಾಡುತ್ತಿದೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಕೆಎಲ್ ರಾಹುಲ್ ಹೋಗುತ್ತಿದ್ದಾರೆ ಈ ಬಾರಿ ಐಪಿಎಲ್ ಕಪ್ ಗೆಲ್ಲುವ ಭರವಸೆಯನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಮೂಡಿಸಿದೆ ಹೀಗಾಗಿ ಕೆಲ ರಾಹುಲ್ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ